ಆಯುರ್ಜೋತಿ.🏮

ಬನ್ನಿ ಹರಡೋಣ ಆಯುರ್ವೇದವ ಹರಡೋಣ.
ಆಯುರ್ವೇದದ ಅರಿವಿನ ಬೆಳಕನು ಎಲ್ಲೆಡೆ ಹರಡೋಣ. llಪll

ಸ್ವಸ್ಥ ಬದುಕಿಗೆ, ರೋಗ ಶಮನಕ್ಕೆ ಇದುವೇ ಔಷಧವು
ದಿನಋತುಚರ್ಯ ರಸಾಯನ ಯೋಗದಿ ಸಾರ್ಥಕ ಜೀವನವು ll೧ll

ಸ್ವಾರ್ಥವ ತೊರೆದು ಪರಾರ್ಥಕೆ ಬದುಕುವ ಸದೃತ್ತವ ಅರಿತು
ಸ್ವಚ್ಛ ಸಮಾಜವ ಸೇರಿಯೇ ಕಟ್ಟುವ ಭೇದಗಳನು ಮರೆತು. ll೨ll

ಕಾಯ ವಾಚ ಮನಸಾ ಪರರಿಗೆ ಕೇಡನ್ನು ಬಗೆಯದಿರಿ
ಕರುಣೆ ಪ್ರೇಮದಿ ಬೆರೆತು ಬದುಕಿರಿ ಸೇಡನ್ನು ಬಯಸದಿರಿ ll೩ll

ದೇಹ ಮನ: ಸಮಾಜವ ಕಾಯುವ ವೈದ್ಯನೆ ಶಿಕ್ಷಕನು.
ರೋಗರುಜಿನಗಳ ತಡೆದು ಬದುಕಲು ಕಲಿಸುವ ರಕ್ಷಕನು. ll೪ll

ಆರ್ತರ ಸೇವೆಗೆ ಆಯುವ ಸವೆಸುವ ಅನುದಿನವೂ ಶ್ರಮಿಸೀ.
ಆಪ್ತರ ನೆನೆದು ಮುಂದೆ ಸಾಗುವ ಧನ್ವಂತ್ರಿಗೆ ನಮಿಸಿ. ll೫ll
- ✍️ನಾಬಾಹಿ

Comments

Popular posts from this blog

ವೈದ್ಯೋ ನಾರಾಯಣೋ ಹರಿಃ

ವೈದ್ಯರತ್ನ ಶಿರೋಮಣಿ : ಡಾ. ಬಿದಾನ್ ಚಂದ್ರ ರಾಯ್.

ನವಭಾರತಕ್ಕಾಗಿ ಆಯುರ್ವೇದ