Posts

Showing posts from November, 2024

ಆಯುರ್ವೇದ : ಒಂದು ಕಿರು ಪರಿಚಯ

Image
                    ಆಯುರ್ವೇದವು ಬಹುಶಃ ಮಾನವ ನಾಗರಿಕತೆಯ ಅತ್ಯಂತ ಪುರಾತನ ವೈದ್ಯಶಾಸ್ತ್ರ ಹಾಗೂ ಇಂದಿಗೂ ತನ್ನ ಮೂಲರೂಪದಲ್ಲಿಯೇ ಪ್ರಸ್ತುತವಾಗಿರುವ ಏಕೈಕ ಜೀವನ ಶಾಸ್ತ್ರ. ಆಧುನಿಕತೆಯ ಅಲೆಯಲ್ಲಿ ಅದೆಷ್ಟೋ ಶಾಸ್ತ್ರಗಳು ಕೊಚ್ಚಿಹೋದರೂ ಆಯುರ್ವೇದ ತನ್ನ ಹಿರಿಮೆ ಹಾಗೂ ಗರಿಮೆಗಳಿಂದ ಅಚಲವಾಗಿ ಎಂದಿಗೂ ಸ್ಥಿರವಾಗಿದೆ. ವಿಶ್ವದಾದ್ಯಂತ ಆಯುರ್ವೇದ ಕೇವಲ ವೈದ್ಯಶಾಸ್ತ್ರವಷ್ಟೇ ಅಲ್ಲದೆ ಜೀವನ ವಿಜ್ಞಾನವಾಗಿ ಬಳಕೆಯಾಗುತ್ತಿದೆ. ಆಯುರ್ವೇದ ಒಂದು ಸಂಸ್ಕೃತ ಶಬ್ದ ಇದನ್ನು ಬಿಡಿಸಿದಾಗ “ಆಯಸ್ಸಿನ ಜ್ಞಾನ” ಅಥವಾ “ಜೀವನದ ಜ್ಞಾನ” ಎಂಬ ಕನ್ನಡ ಅರ್ಥ ದೊರೆಯುತ್ತದೆ. ಆದಿ ದಿನಗಳಿಂದಲೂ ಆಯುರ್ವೇದ ವೈಯಕ್ತಿಕ ಆರೋಗ್ಯದ ಜೊತೆ ಜೊತೆಗೆ ಸಮುದಾಯದ ಆರೋಗ್ಯವನ್ನು ಒಂದು ಪ್ರಮುಖ ಕಾಳಜಿಯಾಗಿ ಪರಿಗಣಿಸುತ್ತಾ ಬಂದಿರುವುದು ಇದರ ವಿಶಿಷ್ಟತೆ. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಔಷಧಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಒಟ್ಟು ದೇಶಿಯ ಉತ್ಪಾದನೆ (GDP) ಯಲ್ಲಿ ಹೆಚ್ಚುತ್ತಿರುವ ಆಯುರ್ವೇದದ ಪಾಲುದಾರಿಕೆ ಆಯುರ್ವೇದದ ಮಾನ್ಯತೆಗೆ ಕೈಗನ್ನಡಿಯಾಗಿದೆ.      ಆಯುರ್ವೇದದ ಉಗಮ ಸೃಷ್ಟಿಯ ಉಗಮದೊಂದಿಗೆ ಆಗಿರಬೇಕು. ಆದರೂ ಪ್ರಸ್ತುತ ಪುರಾವೆಗಳ ಪ್ರಕಾರ ಇತಿಹಾಸಕಾರರು ಆಯುರ್ವೇದವನ್ನು ...

ನವಭಾರತಕ್ಕಾಗಿ ಆಯುರ್ವೇದ

Image
                    ‘’ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ" 15ನೇ ಶತಮಾನದ ಜ್ಞಾನಮಣಿ ಮುಕುಟ  ಕನಕದಾಸರ ಸಾಲುಗಳಿವು, ಹೊಟ್ಟೆಪಾಡಿಗಾಗಿ ದುಡಿಯಲು ಬಹಳಷ್ಟು ನೌಕರಿಗಳಿವೆ ಆದರೆ ಹೊಟ್ಟೆಪಾಡಿನ ಜೊತೆಜೊತೆಗೆ ಆತ್ಮ ಸಂತೃಪ್ತಿಯನ್ನು ಗಳಿಸಬಹುದಾದ ಕೆಲವೇ ಹುದ್ದೆಗಳಲ್ಲಿ ವೈದ್ಯ ವೃತ್ತಿಯೂ ಒಂದು. ವೈದ್ಯನಾದ ಮಾತ್ರಕ್ಕೆ ಬದುಕು ಸಾರ್ಥಕವೆಂದೆನಲ್ಲ, ವೈದ್ಯನನ್ನು "ಯಮರಾಜ ಸಹೋದರ" ಎಂದೂ ಹೇಳಿರುವುದುಂಟು. ಚರಕ ಸಂಹಿತೆ ಪ್ರತಿಪಾದಿಸುವಂತೆ ಕೋಚಿತ್ ಧರ್ಮಕ್ಕೆ ಮೊದಲ ಪ್ರಾಶಸ್ತ್ಯ ನೀಡಿ ಕೊಚಿತ್ ಅರ್ಥಕ್ಕೆ ನಂತರದ ಆದ್ಯತೆ ಬರಬೇಕು.              ವಿಶ್ವ ಸಂಸ್ಕೃತಿಗೆ ಭಾರತದ ಅತ್ಯಮೂಲ್ಯ ಕೊಡುಗೆಗಳಲ್ಲಿ ಯೋಗ ಮತ್ತು ಆಯುರ್ವೇದ ಅಗ್ರಮಾನ್ಯವಾದವುಗಳು. ಜ್ಞಾನ ಮತ್ತು ಸಂಸ್ಕೃತಿಗಳೇ ಜಗತ್ತನಾಳುವ ಶಕ್ತಿಗಳು ಇವನ್ನು ಸಾಫ್ಟ್ ಪವರ್ಸ್ ಎಂದು ಪರಿಗಣಿಸಲಾಗುತ್ತದೆ. ಭಾರತ ಮರಳಿ ವಿಶ್ವಗುರುವಾಗಲು ಈ ಸಾಫ್ಟ್ ಪವರ್ ಗಳ ಕುರಿತು ಹೆಚ್ಚು ಗಮನಹರಿಸಬೇಕಿದೆ, ಭಾರತ ಸರ್ಕಾರ, ಅಣುಶಕ್ತಿ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನಗಳ  ಜೊತೆಗೆ ಕಲೆ ಮತ್ತು ಸಂಸ್ಕೃತಿಗಳ ಉತ್ತೇಜನಕ್ಕಾಗು ಆದ್ಯತೆ ನೀಡುತ್ತಿರುವುದು ಶ್ಲಾಘನೀಯ.  G20 ಶೃಂಗಸಭೆಯ ನಾಯಕತ್ವದಲ್ಲಿ ಭಾರತ ಸಂಸ್ಕೃತಿಯ ಅನಾವರಣ ಜಗತ್ತಿಗಾ...