Posts

Showing posts from December, 2024

ಆಯುರ್ವೇದದ ವಿಭಾಗಗಳು

                       ಆಯುರ್ವೇದ ಪ್ರಕೃತಿಯಷ್ಟೇ ಸಹಜವಾದದ್ದು. ಸೃಷ್ಟಿಯ ಆರಂಭದಲ್ಲೇ ಆಯುರ್ವೇದ ಅಸ್ತಿತ್ವದಲ್ಲಿದ್ದು, ಮಾನವ ತನ್ನ ವಿಕಸನದ ಹಾದಿಯಲ್ಲಿ ಪ್ರಕೃತಿಯೊಂದಿಗೆನ ಒಡನಾಟದಿಂದ ಕ್ರಮೇಣ ಔಷದ ಶಾಸ್ತ್ರವನ್ನು ಹರಿಯುತ್ತಾ ಹೋದ ಎನ್ನಬಹುದು.  ಐತಿಹಾಸಿಕವಾಗಿ ಆಯುರ್ವೇದವು ಎರಡು ಸಂಪ್ರದಾಯಗಳಾಗಿ ಸಾಗಿ ಬಂದಿದೆ, ದೇವರಾಜ ಇಂದ್ರನಿಂದ ಮೊದಲಾಗಿ ಭಾರದ್ವಜ ಮಹರ್ಷಿಗಳ ಮೂಲಕ ಅತ್ರೇಯಾದಿ ಮಹರ್ಷಿಗಳಲ್ಲಿ ಪ್ರಚಲಿತವಾಗಿದ್ದ “ಔಷಧ ಶಾಸ್ತ್ರ” ವಿಜ್ಞಾನ ಆತ್ರೇಯ ಸಂಪ್ರದಾಯವೆನಿಸಿಕೊಂಡರೆ, ಸಮುದ್ರ ಮಂಥನದ ಧನ್ವಂತರಿಯಿಂದ ಉದ್ಭವವಾಗಿ ಕಾಶಿರಾಜ ದೆವ್ವದಾಸನ ಮೂಲಕ ಸುಶ್ರುತಾದಿ ಮಹರ್ಷಿಗಳಲ್ಲಿ ಪ್ರಚಲಿತವಾಗಿದ್ದ “ಶಸ್ತ್ರ ಚಿಕಿತ್ಸಾ” ವಿಜ್ಞಾನ ಧನ್ವಂತರಿ ಸಂಪ್ರದಾಯ ಎನಿಸಿಕೊಳ್ಳುತ್ತದೆ. ಆತ್ರೇಯ ಮಹರ್ಷಿಗಳ ಶಿಷ್ಯ ಅಗ್ನಿವೇಶ ರಚಿಸಿದ ಅಗ್ನಿವೇಶ ಸಂಹಿತೆಯು ಚರಕ ಮುನಿಯಿಂದ ಪ್ರತಿ ಸಂಸ್ಕರಣೆಗೊಂಡ ಚರಕ ಸಂಹಿತೆ ಆತ್ರೇಯ ಸಂಪ್ರದಾಯದ ಮೂಲ ಗ್ರಂಥವಾಗಿ ಇಂದಿಗೂ ಪ್ರಸ್ತುತವಾಗಿದೆ, ಅಂತೆಯೇ ದಿವೊದಾಸ ಧನ್ವಂತರಿಯ ಶಿಷ್ಯರಾದ ಶುಶ್ರುತಮುನಿಗಳು ರಚಿಸಿದ “ಸುಶ್ರುತ ಸಂಹಿತೆ” ಧನ್ವಂತರಿ ಸಂಪ್ರದಾಯದ ಮೂಲ ಗ್ರಂಥವಾಗಿದೆ.      ಆಯುರ್ವೇದವು ಎಂಟು ವಿಭಾಗಗಳಾಗಿ ವಿಂಗಡಣೆಗೊಂಡಿ...